ವಿರಾಜಪೇಟೆ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ 3ನೇ ವಾರ್ಡ್ನ ದಖ್ಖನಿ ಮೊಹಲ್ಲಾದಲ್ಲಿ ಅರುಣ ಎಂಬುವರಿಗೆ ಸೇರಿದ ಮನೆಯ ಕಾಂಪೌಂಡ್ ಭಾಗಶಃ ಕುಸಿದಿದೆ.
ಇದರ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸೋಮಣ್ಣ ಅವರ ಕಾರಿನ ಮೇಲೆ ಮಣ್ಣು-ಕಲ್ಲು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಪುರಸಭಾ ಸದಸ್ಯ ರಾಜೇಶ್ ಪದ್ಮನಾಭ, ಮುಖ್ಯಾಧಿಕಾರಿ ಚಂದ್ರಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪುರಸಭಾ ಸಿಬ್ಬಂದಿ ಸೋಮವಾರ ಮಣ್ಣು ತೆರವು ಕಾರ್ಯ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.