More

    ಕುರುಬರ ಸಂಘದ ನಿರ್ದೇಶಕರಿಗೆ ಸನ್ಮಾನ

    ಚಾಮರಾಜನಗರ : ತಾಲೂಕು ಕುರುಬರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಶಿವಸ್ವಾಮಿ ಅವರನ್ನು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಂಘದಿಂದ ಸನ್ಮಾನಿಸಲಾಯಿತು.

    ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ನೂತನ ನಿರ್ದೇಶಕ ಶಿವಸ್ವಾಮಿ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು. ಸದಾಶಿವಮೂರ್ತಿ ಮಾತನಾಡಿ, ಶಿವಪುರ ಗ್ರಾಮದ ಶಿವಸ್ವಾಮಿ ಅವರು ಡೇರಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ತಾಲೂಕು ಕುರುಬರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸುವ ಮೂಲಕ ಸಮಾಜದ ಪ್ರತಿನಿಧಿಯಾಗಿದ್ದಾರೆ. ಸರಳ ವ್ಯಕ್ತಿತ್ವವನ್ನು ಹೊಂದಿರುವ ಶಿವಸ್ವಾಮಿ ಡೇರಿಯಲ್ಲಿ ಸಹ ಉತ್ತಮ ಹೆಸರು ಪಡೆದುಕೊಂಡಿದ್ದರು ಎಂದರು.

    ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.ಪಿ. ಶಾಂತು, ಉಪಾಧ್ಯಕ್ಷ ವಿಜಿಕುಮಾರ್, ಶಿವನಾಗಪ್ಪ, ದೊಡ್ಡಲಿಂಗಪ್ಪ, ವೃಷಬೇಂದ್ರ, ಮಹದೇವಸ್ವಾಮಿ, ಮಂಗಲಕುಮಾರ್, ವಿಷಕಂಠ, ಮೂಡ್ನಾಕೂಡು ಬಸವಣ್ಣ, ಮಹದೇವಕುಮಾರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts