More

    ಅಕ್ಬರ್, ಅಂತೋನಿ ಫುಲ್ ಖುಷ್, ಅಮರ್ ಮಟಾಶ್: ಬಜೆಟ್ ಕುರಿತು ಸಿ.ಸಿ. ಪಾಟೀಲ ವ್ಯಂಗ್ಯ

    ವಿಜಯವಾಣಿ ಸುದ್ದಿಜಾಲ ಗದಗ

    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಡಿಸಿದ ರಾಜ್ಯ ಬಜೆಟ್ ಸಂಪೂರ್ಣ ಹಿಂದೂ ವಿರೋದಿ ಬಜೆಟ್ ಆಗಿದ್ದು, ಅಕ್ಬರ್ ಅಂತೋನಿ ಫುಲ್ ಖುಷ್, ಅಮರ್ ಮಟಾಶ್ ಎಂದು ಬಜೆಟ್ ಕುರಿತು ವ್ಯಂಗ್ಯ ವಾಡಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಮುಖ ಮಠಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನ ನೀಡಿದ್ದನ್ನು ಹಿಂಪಡೆದಿದ್ದಾರೆ. ಬಾಳೆಹೊನ್ನುರು ಪೀಠಕ್ಕೆ ಕೊಟ್ಟ 5 ಕೋಟಿ, ಶ್ರೀಶೈಲ ಪೀಠಕ್ಕೆ ನೀಡಿದ್ದ ಅನುದಾನ ಹಿಂಪಡೆದು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಜೆಟ್ ಕುರಿತು ಆರೋಪಿಸಿದರು. 

    ಜೈನಮುನಿ ಹತ್ಯೆ ಕುರಿತು ಮಾತನಾಡಿದ ಸಿ.ಸಿ. ಪಾಟೀಲ,  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಘಟನೆಗಳು ನಡೆಯುತ್ತವೆ. ಪರೇಶ ಮೇಸ್ತಾ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲೂ ಕಾಂಗ್ರೆಸ್ ಪಕ್ಷ ಆರೋಪಿಗಳ ರಕ್ಷಣೆ ನೀಡಿದೆ. ಕೇರಳದಿಂದ ಆಗಮಿಸಿ ಹಂತಕರು ಹತ್ಯೆ ಮಾಡಿದ್ದು, ಪೊಲೀಸರು ಮೂಖವಿಸ್ಮಿತರಾಗಿದ್ದು ಜಗತ್ತೀಗೆ ತಿಳಿದಿದೆ ಎಂದು ಆರೋಪಿಸಿದರು. 

    *ಒಳಗೊಂದು ಹೊರಗೊಂದು* 

    ಕಿಸಾನ್ ಸಮ್ಮಾನ್, ರೈತವಿದ್ಯಾನಿಧಿ ಬಜೆಟ್ ನಲ್ಲಿ ಉಲ್ಲೇಖ ಇಲ್ಲ. ಬಜೆಟ್ ಮುಖಪುಟದಲ್ಲಿ 200 ಯುನಿಟ್ ಎಂದು ಮುದ್ರಿಸುತ್ತಾರೆ. ಆದರೆ ಒಳಗಿನ ಪುಟದಲ್ಲಿ ವಾರ್ಷಿಕ ಸರಾರಿ ವಿದ್ಯುತ್ ಬಳಕೆಯ ಶೇ.10 ವಿದ್ಯುತ್ ನೀಡುವುದಾಗಿ ಹೇಳುತ್ತಾರೆ. ಇದು ಇತಿಹಾಸಲ್ಲೇ ಮೊದಲ ಬಾರಿ ಆಗಿದೆ ಎಂದು ಆರೋಪಿಸಿದರು. 

    *ಕೇಂದ್ರದ ವಿರುದ್ಧ ಟೀಕೆ ಸಲ್ಲದು:* 

    ರಾಜ್ಯದ ಇತಿಹಾಸದಲ್ಲಿ ಬಜೆಟ್ ವೇಳೆ ಅತೀ ಹೆಚ್ಚ ಬಾರಿ ಕೇಂದ್ರ ಸರ್ಕಾರ ವಿರುದ್ಧ ಟೀಕೆ ಮಾಡಿದ್ದು ಖಂಡನೀಯ. ಟೀಕೆ ಮಾಡಬೇಕಿದ್ದರೆ ಕೆಪಿಸಿಸಿ ಕಚೇರಿ ಬಳಸಿಕೊಳ್ಳಬೇಕಿತ್ತು. ಇಂತಹ ಬಜೆಟ್ ಮಂಡನೆಯಿಂದ ವಿಧಾನ ಮಂಡಲದ ಗೌರಕ್ಕೆ ಕುಂದು ಬಂದಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

    ಸಿದ್ದರಾಮಯ್ಯ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಕೇಂದ್ರದ ವಿರುದ್ದ ಟೀಕೆ ಮಾಡಲು ಬೇರೆ ವೇದಿಕೆ ಬಳಸಿಕೊಳ್ಳಿವುದು ಅವರಿಗೆ ಅರಿವಿಗೆ ಬರಬೇಕಿತ್ತು ಎಂದು ಟೀಕಿಸಿದರು. ತೆರಿಗೆ, ಶುಲ್ಕದ ಕುರಿತು ಮಾತನಾಡಿದ ಅವರು 8000 ಕೋಟಿ ಸಾಲ ಪಡೆಯಲು ಸರ್ಕಾರ ಇಚ್ಚಿಸಿದೆ. ಶುಲ್ಕ, ತೆರಿಗೆ ಹೆಚ್ಚಿಸಿದೆ.  ಸಾಲ, ತೆರಿಗೆ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿದರೂ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.

    ಈಗಾಗಲೇ ಆರ್ಥಿಕ ವರ್ಷದ ಮೂರು ತಿಂಗಳು ಕಳೆದಿದೆ. ಇನ್ನೂ ಗ್ಯಾರಂಟಿ ಯೋಜನೆ ಜಾರಿ ಆಗುತ್ತಿಲ್ಲ. ಇನ್ನೂ ಮೂರು ತಿಂಗಳು ಈ ಯೋಜನೆ ಜಾರಿ ಆಗುವುದಿಲ್ಲ. ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.

    ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ಕಡಿತ ಮಾಡಲಾಗಿದೆ. ರೈತರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಆರೋಪಿಸಿದರು. ರೈತ ವಿರೋಧಿ ನೀತಿ ಅನುಸರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಇದು ಕುರುಡರ ಬಜೆಟ್ ಎಂದು ಆರೋಪಿಸಿದರು.

    ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಬಜೆಟ್ ಗಿಂತಲೂ ಶೇ.1 ರಷ್ಟು ಅನುದಾನ ಕಡಿಮೆ ಮಾಡಿದೆ. ಮೀನುಗಾರರ, ನೇಕಾರ, ಅಕ್ಕಸಾಲಿಗ, ಸಿಂಪಿಗರ ಮಕ್ಕಳಿಗೆ ಅನುಕೂಲ ಆಗುವ ಸಿಎಂ ವಿದ್ಯಾ ನಿಧಿ ಬಗ್ಗೆ ಬಜೆಟ್ ನಲ್ಲಿ ಉಲ್ಲೇಖ ಇಲ್ಲ ಎಂದು ಆರೋಪಿಸಿದರು.

    ಉಷಾ ದಾಸರ, ಸುನಂದಾ ಬಾಕಳೆ,  ಮುತ್ತಣ್ಣ ಲಿಂಗನಗೌಡ್ರ, ರವಿ ದಂಡಿನ, ಭೀಮಸಿಂಗ್ ರಾಥೋಡ, ಅನಿಲ ಅಬ್ಬಿಗೇರಿ ಇತರರು ಇದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts