More

    ವೈದ್ಯರು, ಕುಟುಂಬದವರಿ೦ದ ರಕ್ತದಾನ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆಯಿಂದ ನಗರದಲ್ಲಿ ಸೋಮವಾರ ವೈದ್ಯರ ದಿನ ಆಚರಿಸಲಾಯಿತು. ಸಾರ್ವಜನಿಕರಲ್ಲಿ ರಕ್ತದಾನದ ಭಯ ಹೋಗಲಾಡಿಸಲು ಮತ್ತು ಜಾಗೃತಿ ಮೂಡಿಸಲು ವೈದ್ಯರು, ಕುಟುಂಬದವರು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.
    ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆ ಅಧ್ಯಕ್ಷ ಡಾ. ಸತೀಶ ಇರಕಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವ ತಿಳಿಸಲು ರಕ್ತದಾನ ಮಾಡಿದ ವೈದ್ಯರನ್ನು ಅಭಿನಂದಿಸಿದರು. ಡೆಂಘೆ ತಡೆಗೆ ಪ್ರತಿಯೊಬ್ಬರೂ ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
    ಅ೦ತಾರಾಷ್ಟ್ರೀಯ ಯೋಗ ದಿನ ಮತ್ತು ವೈದ್ಯರ ದಿನದ ಅಂಗವಾಗಿ ಸಂಘದ ಶಾಖೆಯಲ್ಲಿ ಯೋಗ ಶಿಬಿರ ಆಯೋಜಿಸಲಾಗಿತ್ತು. ಶಿಬಿರದ ಯೋಗ ಶಿಕ್ಷಕಿ ಶೋಭಾ ಹುಲಿಕಟ್ಟಿ ಮಾತನಾಡಿ, ವೈದ್ಯರೂ ಸಮಯ ಮೀಸಲಿಟ್ಟು ಪ್ರತಿದಿನ ಯೋಗ ಮಾಡಬೇಕು ಎಂದರು.
    ಡಾ. ಕಿರಣ್ ಕುಲಕರ್ಣಿ, ಡಾ. ಸಪನ್, ಡಾ. ಗಿರೀಶ ನಾಡಗೀರ, ಡಾ. ಪ್ರಕಾಶ ರಾಮನಗೌಡರ, ಡಾ. ಅನಿಲ, ಡಾ. ರಾಹುಲ್, ಡಾ. ಪ್ರೀತಮ್ ಹುರಕಡ್ಲಿ, ಡಾ. ಶ್ರೀಕಾಂತ ಪೈ., ಡಾ. ನಾಗರಾಜ್, ಡಾ. ಸುಹಾಸ್, ಇತರರು ರಕ್ತದಾನ ಮಾಡಿದರು.
    ಡಾ. ವಾಣಿ ಇರಕಲ್, ಡಾ. ಕವಿತಾ ಮಂಕಣಿ, ಡಾ. ಪಲ್ಲವಿ, ಪುಂಡಲೀಕ ಜಗದಾಳೆ, ಶಿವಾಜಿ ಸೂರ್ಯವಂಶಿ, ಡಾ. ಗೀತಾ ಉತ್ತೂರ, ಡಾ. ದಿನೇಶ, ಡಾ. ರೋಡಾ ಜೇಸುರಾಜ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts