ಮಾನ್ಸೂನ್ ಸುಡುವ ಬೇಸಿಗೆಯಿಂದ ಸ್ವಲ್ಪ ಪರಿಹಾರವನ್ನು ತಂದಿದೆ, ಆದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳ ಕಾಲವಾಗಿದೆ. ಈ ಸಮಯದಲ್ಲಿ ಹಲವು ಆಹಾರಪದಾರ್ಥಗಳು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಸೇವಿಸುವ ಆಹಾರದ ಕಡೆಯೂ ಗಮನ ಹರಿಸಬೇಕು. ಮಳೆಗಾಲದಲ್ಲಿ ನಮಗೆ ಹಾನಿಕಾರಕ ಮಾಡುಬಹುದಾದ ಆಹಾರಗಳು ಯಾವುದೆಂದು ಇಲ್ಲಿ ವಿವರಿಸಲಾಗಿದೆ.
ಇದನ್ನು ಓದಿ: ಅತಿ ಹೆಚ್ಚು ಸ್ವೀಟ್ಸ್ ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಎಂಬ ಭಯವೇ..? ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
- ಸೊಪ್ಪು: ಮಳೆಗಾಲದಲ್ಲಿನ ತಾಪಮಾನ ಮತ್ತು ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಅನುಕೂಲಕರವಾಗಿದೆ, ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳ ಮೇಲೆ. ಇದು ಹೊಟ್ಟೆಯ ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಎಲೆಕೋಸು, ಹೂಕೋಸು ಸೇವನೆಯಿಂದ ದೂರ ಉಳಿದರೆ ಒಳಿತು.
- ಡೈರಿ ಉತ್ಪನ್ನ: ಮಳೆಗಾಲದಲ್ಲಿ, ಹಾಲು, ಮೊಸರು ಅಥವಾ ಚೀಸ್ ನಂತಹ ಡೈರಿ ಉತ್ಪನ್ನಗಳನ್ನು ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ಹುಳಿ ಹಣ್ಣುಗಳೊಂದಿಗೆ ಬೆರೆಸಿ ಸೇವಿಸಬಾರದು. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸಿಟ್ರಸ್ ಹಣ್ಣುಗಳಲ್ಲಿ ಇರುವ ಆಮ್ಲವು ಡೈರಿ ಹೊಟ್ಟೆಯಲ್ಲಿ ಶೇಖರಗೊಳ್ಳಲು ಕಾರಣವಾಗಬಹುದು. ಇದರಿಂದಾಗಿ ಅಜೀರ್ಣ ಉಂಟಾಗಬಹುದು.
- ಮೀನು ಮತ್ತು ಸಿಗಡಿ: ಮಳೆಗಾಲದಲ್ಲಿ ಮೀನು ಮತ್ತು ಸಿಗಡಿ ತಿನ್ನುವುದನ್ನು ನಿಲ್ಲಿಸಿದರೆ ಉತ್ತಮ. ಕಾರಣ ನೀರಿನಲ್ಲಿ ರೋಗಕಾರಕಗಳು ಮತ್ತು ಬ್ಯಾಕ್ಟೀರಿಯಾಗಳ ಉಪಸ್ಥಿತಿಯು ಮೀನುಗಳಿಗೆ ಮತ್ತು ಆ ಮೂಲಕ ಅದನ್ನು ಸೇವಿಸುವ ವ್ಯಕ್ತಿಗೆ ಸೋಂಕು ತರಬಹುದು.
- ಹುರಿದ ಮತ್ತು ಮಸಾಲೆಯುಕ್ತ ಆಹಾರ: ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಸಾಲೆಯುಕ್ತ ಮತ್ತು ಹುರಿದ ಆಹಾರಗಳನ್ನು ಸೇವಿಸಿದರೆ, ಅದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೊರೆ ಹಾಕಬಹುದು. ಇದು ಅಜೀರ್ಣ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು.
- ಅಣಬೆ: ವಿಶೇಷವಾಗಿ ಮಳೆಗಾಲದಲ್ಲಿ ಅಣಬೆ ಅಡುಗೆ ಮಾಡುವುದು ಬೇಡ. ತೇವಾಂಶವುಳ್ಳ ಮಣ್ಣಿನಲ್ಲಿ ಅಣಬೆ ಬೆಳೆಯುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆ ಹೊಂದಬಹುದು, ಒಮ್ಮೆ ಸೇವಿಸಿದರೆ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಕಲ್ಕಿ 2898 AD ಸೀಕ್ವೆಲ್ ಬಿಡುಗಡೆ ಯಾವಾಗ; ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದೇನು? ಇಲ್ಲಿದೆ ಡೀಟೇಲ್ಸ್