ಚಿಕ್ಕಮಗಳೂರಲ್ಲಿ ಕ್ರಿಕೆಟ್​ ಬೆಟ್ಟಿಂಗ್​ ಜಗಳಕ್ಕೆ ಯುವಕ ಬಲಿ

ಚಿಕ್ಕಮಗಳೂರು: ಕ್ರಿಕೆಟ್​ ಬೆಟ್ಟಿಂಗ್​ ಹಣದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿ ಯುವಕ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಗರದ ಕೋಟೆ ಟ್ಯಾಂಕ್​ ಬಳಿ ನಡೆದಿದೆ. ಗವನಹಳ್ಳಿ ಮೂಲದ ಧ್ರುವರಾಜ್​ ಅರಸ್​(23) ಮೃತಪಟ್ಟವ. ವಸ್ತಾರೆ ಮೂಲದ ಪ್ರಮೋದ್​ ಆರೋಪಿ. ಕ್ರಿಕೆಟ್​ ಬೆಟ್ಟಿಂಗ್​ಗೆ ಸಂಬಂಧಿಸಿ ಹಣದ ವ್ಯವಹಾರ ಮಾತನಾಡಲು ಧ್ರುವರಾಜ್​ನನ್ನು ಕರೆಸಿಕೊಂಡ ಗುಂಪೊಂದು ಕೋಟೆ ಬಳಿಯ ದೊಡ್ಡ ಟ್ಯಾಂಕ್​ ಬಳಿ ಹಣ ವಸೂಲಿಗೆ ಮುಂದಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಡ್ಯಾಗರ್​ನಿಂದ ಇರಿದು ಹತ್ಯೆ ಮಾಡಲಾಗಿದೆ. … Continue reading ಚಿಕ್ಕಮಗಳೂರಲ್ಲಿ ಕ್ರಿಕೆಟ್​ ಬೆಟ್ಟಿಂಗ್​ ಜಗಳಕ್ಕೆ ಯುವಕ ಬಲಿ