More

    SSLC ಎಕ್ಸಾಂ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿ ಸಾವು: ಬಸ್​ ಇದ್ದಿದ್ರೆ ನನ್ನ ತಮ್ಮ ಸಾಯುತ್ತಿರಲಿಲ್ಲ… ಮನಕಲಕುತ್ತೆ ಅಕ್ಕನ ಗೋಳಾಟ

    ತುಮಕೂರು: ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.

    ಡಾ.ರಾಜೇಂದ್ರಪ್ರಸಾದ್ ಹೈಸ್ಕೂಲ್​ನ ವಿದ್ಯಾರ್ಥಿ ನವೀನ್(16) ಮೃತ ದುರ್ದೈವಿ. ಇಂದು ನಡೆಯುತ್ತಿದ್ದ ಗಣಿತ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಾದ ನವೀನ್, ಶರತ್, ದರ್ಶನ್ ಸೇರಿ ಮೂವರು ಒಂದೇ ಬೈಕ್​ನಲ್ಲಿ ಅಮೃತೂರಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಜಿನ್ನಾಗರ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಬೈಕ್​, ಡಿವೈಡರ್​ಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ನವೀನ್​ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಮತ್ತಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು. ಆಸ್ಪತ್ರೆಗೆ ರವಾನಿಸಲಾಗಿದೆ. ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸರಿಯಾಗಿ ಬಸ್​ಗಳ ವ್ಯವಸ್ಥೆ ಇದ್ದಿದ್ರೆ ನನ್ನ ತಮ್ಮ ಸಾಯುತ್ತಿರಲಿಲ್ಲ. ಬಸ್ ಇಲ್ಲದ ಕಾರಣ ಬೈಕ್​ನಲ್ಲೇ ಎಕ್ಸಾಂ ಬರಿಯೋಕೆ ಹೋದ… ಆದ್ರೆ ಮಾರ್ಗಮಧ್ಯೆ ಬಾರದ ಲೋಕಕ್ಕೆ ಹೋಗಿಬಿಟ್ಟ… ನಮ್ಮೂರಿಗೆ ಸರಿಯಾಗಿ ಬಸ್​ಗಳ ವ್ಯವಸ್ಥೆ ಇಲ್ಲದಿರುವೇ ನನ್ನ ತಮ್ಮ ನವೀನನ ಸಾವಿಗೆ ಕಾರಣ… ಎಂದು ಮೃತನ ಅಕ್ಕ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

    ಮಗನನ್ನು ಪರೀಕ್ಷೆ ಬರೆಯಲು ಕಳಿಸಿದ ಪಾಲಕರಿಗೆ ಕೆಲವೇ ಕ್ಷಣದಲ್ಲಿ ಆತನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಅಯ್ಯೋ, ಮಗನೇ ಪರೀಕ್ಷೆ ಬರೆಯಲು ಹೋಗ್ತೀನಿ ಅಂದವ ಬಾರದ ಲೋಕಕ್ಕೇ ಹೋಗಿಬಿಟ್ಯಲ್ಲಪ್ಪಾ… ಎಂದು ಪಾಲಕರು ಕಣ್ಣೀರಿಡುತ್ತಿದ್ದರು.

    ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

    ‘ನನ್ನಮ್ಮ ಸೂಪರ್​ ಸ್ಟಾರ್​’ ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

    ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts