ನಿಂಬೆ ರಸ ಅಥವಾ ಲೆಮನ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಶಾಖವನ್ನು ನಿವಾರಿಸಲು ಲೆಮೆನ್ ಜ್ಯೂಸ್ ಅನ್ನು ಹೆಚ್ಚು ಸೇವಿಸಲಾಗುತ್ತದೆ. ಇದು ದೇಹವನ್ನು ಸದಾ ಹೈಡ್ರೇಟ್ ಆಗಿ ಇಡುತ್ತದೆ. ಅಲ್ಲದೆ, ಇದು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಆದರೆ ಹೆಚ್ಚಾಗಿ ಲೆಮನ್ ಜ್ಯೂಸ್ ಕುಡಿಯುವುದರಿಂದ ಕೆಲವೊಂದು ಅಡ್ಡಪರಿಣಾಮಗಳು ಸಹ ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಸಿಕ್ಕಾಪಟ್ಟೆ ಲೆಮನ್ ಜ್ಯೂಸ್ ಕುಡಿದರೆ ಕೆಲವು ಅಡ್ಡಪರಿಣಾಮಗಳು ಸಹ ಬೀರಲಿವೆ. ಆ ಅಡ್ಡ ಪರಿಣಾಮಗಳೇನು ಎಂಬುದನ್ನು ನಾವೀಗ ತಿಳಿಯೋಣ.
* ಹೆಚ್ಚು ಲೆಮನ್ ಜ್ಯೂಸ್ ಸೇವಿಸುವುದರಿಂದ ಎದೆಯುರಿ ಉಂಟಾಗುತ್ತದೆ. ಏಕೆಂದರೆ ಇದು ಪೆಪ್ಸಿನ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಪ್ರೋಟೀನ್ ಅನ್ನು ಒಡೆಯುವ ಕಿಣ್ವವಾಗಿದೆ. ಇದಿಷ್ಟೇ ಅಲ್ಲದೆ, ಅತಿಯಾದ ಲೆಮನ್ ಜ್ಯೂಸ್ ಸೇವನೆಯು ಪೆಪ್ಟಿಕ್ ಹುಣ್ಣುಗೆ ಕಾರಣವಾಗಬಹುದು. ಇದು ಹೆಚ್ಚು ಅಪಾಯಕಾರಿ ಕೂಡ ಹೌದು.
* ಲೆಮನ್ ಜ್ಯೂಸ್ ಅನ್ನು ಆಗಾಗ ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಏಕೆಂದರೆ, ನಿಂಬೆ ನೀರು ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ನೀರು ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ, ದೇಹದಲ್ಲಿರುವ ಅನೇಕ ಎಲೆಕ್ಟ್ರೋಲೈಟ್ಗಳು ಮತ್ತು ಸೋಡಿಯಂನಂತಹ ಅಂಶಗಳು ಮೂತ್ರದ ಮೂಲಕ ಹೊರಬರುತ್ತವೆ. ಇದು ನಿರ್ಜಲೀಕರಣದ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚು ಲೆಮನ್ ಜ್ಯೂಸ್ ಸೇವಿಸುವುದರಿಂದ ಪೊಟ್ಯಾಸಿಯಮ್ ಕೊರತೆ ಉಂಟಾಗುತ್ತದೆ.
* ಲೆಮನ್ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಕೆಲವು ಸಂದರ್ಭಗಳಲ್ಲಿ ಆಂತರಿಕ ಅಂಗಗಳಿಗೆ ಹಾನಿಯಾಗುವ ಅಪಾಯವೂ ಇದೆ.
* ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಆಕ್ಸಲೇಟ್ ಕೂಡ ಇದೆ. ಇದನ್ನು ಹೆಚ್ಚು ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗಿ, ಮೂತ್ರಪಿಂಡದ ಕಲ್ಲುಗಳು ರಚನೆಯಾಗುವ ಅಪಾಯವಿದೆ.
* ಹೆಚ್ಚು ಲೆಮನ್ ಜ್ಯೂಸ್ ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆ ಆಮ್ಲೀಯತೆಯನ್ನು ಹೊಂದಿದೆ. ಇದು ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
* ಲೆಮನ್ ಜ್ಯೂಸ್ ಅನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿ ಅಸಿಡಿಟಿ ಉಂಟಾಗುತ್ತದೆ.
* ಟಾನ್ಸಿಲ್ (ಬಾಯಿಯ ಹಿಂಭಾಗದಲ್ಲಿ ಮತ್ತು ಗಂಟಲಿನ ಮೇಲ್ಭಾಗದಲ್ಲಿ ಇರುವ ದುಗ್ಧರಸ ಗ್ರಂಥಿಗಳು) ಸಮಸ್ಯೆ ಇರುವವರು ಲೆಮನ್ ಜ್ಯೂಸ್ ಕುಡಿಯಬಾರದು. ಏಕೆಂದರೆ, ತುಂಬಾ ಹಾನಿಕಾರಕ ಎಂದು ಅಧ್ಯಯನಗಳು ಹೇಳಿವೆ. ಸಂಶೋಧನೆಯ ಪ್ರಕಾರ, ಹೆಚ್ಚು ನಿಂಬೆ ನೀರನ್ನು ಸೇವಿಸುವುದರಿಂದ ಗಂಟಲು ನೋವು ಉಂಟಾಗುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್ ಪಠಾಣ್
ರೋಹಿತ್, ವಿರಾಟ್ ಬೆನ್ನಲ್ಲೇ ಟಿ20 ಕ್ರಿಕೆಟ್ಗೆ ಮತ್ತೊಬ್ಬ ಸ್ಟಾರ್ ಆಟಗಾರ ಗುಡ್ಬೈ! ಫ್ಯಾನ್ಸ್ ಶಾಕ್