ಹಾಸನ: ರಾಜ್ಯದಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ವಿವಾದದ ಬೆನ್ನಲ್ಲೇ ಇನ್ನೊಂದು ಹೊಸ ಅಭಿಯಾನ ಶುರುವಾಗಿದೆ. ಮುಸ್ಲಿಂ ಸಮುದಾಯದವರು ನಮಾಜ್ ಮಾಡಿ, ಅಲ್ಲಾ ಹು ಅಕ್ಬರ್ ಎಂದು ಕೂಗುವ ವೇಳೆಗೆ ದೇವಾಲಯಗಳಲ್ಲಿ ಜೈ ಶ್ರೀರಾಮ್ ಎಂದು ಕೂಗಿಸುವ ಅಭಿಯಾನಕ್ಕೆ ಮಂಗಳವಾರ ಮುಂಜಾನೆ 5.30ಕ್ಕೆ ಅರಸೀಕೆರೆಯಲ್ಲಿ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಧ್ವನಿವರ್ಧಕ ಮೂಲಕ ರಾಮತಾರಕ ಮಂತ್ರ ಪಠಿಸಿದರು.
ಕಾನೂನು ಎಲ್ಲರಿಗೂ ಒಂದೇ: ಅವರು ಅಲ್ಲನನ್ನು ರಾಗದಿಂದಲೇ ಕೂಗುತ್ತಾರೆ. ನಾವೂ ಅದೇ ರೀತಿ ಶ್ರೀರಾಮನನ್ನು ರಾಗದಿಂದಲೇ 5 ಬಾರಿ ಕೂಗಿದ್ದೇನೆ. ಇದನ್ನು ಯಾರೂ ತಡೆಯಬಾರದು. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ರಿಷಿಕುಮಾರ ಸ್ವಾಮೀಜಿ ಹೇಳಿದರು.
ರಾಜ್ಯಾದ್ಯಂತ ಈ ಅಭಿಯಾನ ವಿಸ್ತರಿಸಲು ಚಿಂತಿಸಲಾಗಿದೆ. ದೇವಸ್ಥಾನಗಳಲ್ಲಿ ಪ್ರತಿದಿನ 5 ಗಂಟೆಗೆ ರಾಮಭಜನೆ ಹಾಕುತ್ತೇವೆ. ಆಜಾನ್ ನಿಲ್ಲಿಸದಿದ್ದರೆ ದೇವಾಲಯಗಳಲ್ಲಿ ಸ್ಪೀಕರ್ ಹಾಕುತ್ತೇವೆ. ರಾಮ ಭಜನೆ, ಶಿವನಾಮ, ಓಂಕಾರಗಳನ್ನೂ ಹಾಕುತ್ತೇವೆ ಎಂದು ಹಿಂದು ಪರ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ.
ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ