More

    30ನೇ ವಾರ್ಡಿನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ

    ಹಾಸನ: ನಗರದ 30ನೇ ವಾರ್ಡಿನಲ್ಲಿ ಅಲ್ಪಸಂಖ್ಯಾತರ ಅನುದಾನದದಡಿ ಸುಮಾರು 1. 75 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
    ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, 30ನೇ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿರುವುದಿಲ್ಲ ಎನ್ನುವ ಬೇಡಿಕೆ ಮೇರೆಗೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಅನುದಾನ ನೀಡುವಂತೆ ಕೇಳಿದ್ದಾಗ ಅಲ್ಪಸಂಖ್ಯಾತರ ನಿಧಿಯಿಂದ ಮೂರು ಕೋಟಿ ರೂಗಳ ಅನುಧಾನ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಈ ವಾರ್ಡ್‌ಗೆ ಸಂಬಂಧಪಟ್ಟಂತೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು ಹೇಳಿದರು.
    30ನೇ ವಾರ್ಡಿನಲ್ಲಿ ಮತ್ತು ಅಲ್ಪಸಂಖ್ಯಾತರ ಹೆಚ್ಚಾಗಿ ಇರುವ ವಾರ್ಡಿನಲ್ಲಿ ಬಹಳಷ್ಟು ಕೆಲಸಗಳು ಆಗಬೇಕಾಗಿದ್ದು, ಸಂಸದರಿಗೂ ಮನವಿ ಮಾಡಿದು. 15ನೇ ಹಣಕಾಸು ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಯೋಜನೆ ತಯಾರಿಸಿ ಕೆಲಸ ಮಾಡಲಾಗುವುದು. ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ತಂದು ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಏನೆ ಕೆಲಸ ಕಾರ್ಯಗಳು ಇದ್ದರೂ ನಿಮ್ಮ ಜೊತೆ ಇರುತ್ತಾನೆ. 1.75ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಇದರಲ್ಲಿ ಏಳರಿಂದ ಎಂಟು ರಸ್ತೆಗಳ ಕೆಲಸ ನಡೆಯಲಿದೆ. ಒಟ್ಟು ಮೂರು ಕೋಟಿ ರೂಗಳನ್ನು ರಸ್ತೆ ಕಾಮಗಾರಿಗಳಿಗೆ ಹಣ ತರಲಾಗಿದೆ ಎಂದು ಹೇಳಿದರು.
    ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, 30ನೇ ವಾರ್ಡಿನಲ್ಲಿ ಅಲ್ಪಸಂಖ್ಯಾತರ ಬಡಾವಣೆ ಇದ್ದು, ಅಲ್ಪಸಂಖ್ಯಾತರ ಗಣನೆಗೆ ತೆಗೆದುಕೊಂಡು. ಈ ಭಾಗಕ್ಕೆ ಮೂರು ಕೋಟಿ ಅನುಧಾನವನ್ನು ಶಾಸಕರು ತಂದಿದ್ದಾರೆ. ರಸ್ತೆ, ಚರಂಡಿಯನ್ನು ಅಭಿವೃದ್ಧಿ ಮಾಡುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುಧಾನದ ಅವಶ್ಯಕತೆ ಇದ್ದು, ಹಿಂದೆ ಇದ್ದಂತಹ ಶಾಸಕರು ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಶಾಸಕ ಎಚ್.ಪಿ. ಸ್ವರೂಪ್ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಚ್.ಡಿ. ರೇವಣ್ಣನವರು ಸಚಿವರಾದ ವೇಳೆ 1 ಕೋಟಿ ಅನುದಾನವನ್ನ್ನು ವಿಶ್ವನಾಥ್ ನಗರಕ್ಕೆ ಕೊಟ್ಟಿದ್ದಾರೆ. ಸುಮಾರು 6 ಕೊಟಿಯನ್ನು ಹುಣಸಿನಕೆರೆ ಸೇತುವೆ ಮತ್ತು ವಿಶ್ವನಾಥ ನಗರ ಸೇತುವೆಗೆ ಹಣವನ್ನು ಸ್ವರೂಪ್ ಅವರ ಒತ್ತಾಯದ ಮೇರೆಗೆ ಮಾಡಲಾಯಿತು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ರಫೀಕ್, ಜೆಡಿಎಸ್ ಮುಖಂಡರಾದ ದಸ್ತಗೀರ್, ಅಕ್ಮಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts