ಕಲಬುರಗಿ: ಕಾಂಗ್ರೆಸ್ ಹೈಕಮಾಂಡ್ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು. ಕೋಮುವಾದ ಸೋಲಿಸಲು ಕಾಂಗ್ರೆಸ್ ಪರ ದಲಿತರು ಶ್ರಮಿಸಿದ್ದು, ರಾಜ್ಯದ ಡಾ.ಜಿ.ಪರಮೇಶ್ವರ, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ ಅವರಂಥ ಸಮರ್ಥ ದಲಿತ ನಾಯಕರಿದ್ದು, ಒಬ್ಬರನ್ನು ಸಿಎಂ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಬಸವಣ್ಣನವರ ಹೆಸರು ಹೇಳುತ್ತಿರುವ ಸ್ವಾಮೀಜಿಗಳು ಜಾತಿಗೊಂದು ಮಠ ಮಾಡಿಕೊಂಡು ತಮ್ಮ ಜಾತಿಯವರನ್ನು ಸಿಎಂ ಮಾಡಬೇಕು ಎಂದು ಒತ್ತಡ ಹೇರುತ್ತಿರುವುದು ದುರಂತ. ಬುದ್ಧ, ಬಸವ, ಪರಮಹಂಸ, ವಿವೇಕಾನಂದ, ರಮಣ, ನಾರಾಯಣಗುರು ಮೊದಲಾದ ನೀತಿಗುರುಗಳು ತೆರೆಯ ಹಿಂದೆ ಸರಿದಿz್ದÁರೆ. ಮಠಾಧೀಶರು ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದರು. ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಮಹೇಶ ಕೋಕಿಲೆ ಇತರರಿದ್ದರು.