More

    ಮಹಿಳೆಯರಿಂದ ರಸ್ತೆ ಬಂದ್​ ಮಾಡಿ ಪ್ರತಿಭಟನೆ

    ಗದಗ: ಸರ್ಮಕವಾಗಿ ಕುಡಿಯುವ ನೀರು ಪೂರೆಕೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಮಹಿಳೆಯರಿಂದ ರಸ್ತೆ ಬಂದ್​ ಮಾಡಿ ಬಹತ್​ ಪ್ರತಿಭಟನೆ ಮಾಡಿದರು.

    ಇಲ್ಲಿನ ಸಿದ್ಧಾರ್ಥ ನಗರದ ನಿವಾಸಿಗಳಿಂದ ನಗರದ ಹೊಸ ಬಸ್​ ನಿಲ್ದಾಣಕ್ಕೆ ಹೋಗುವ ರಸ್ತೆ ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 15 ದಿನಗಳಿಂದ ನೀರು ಪೂರೆಕೆ ಆಗದ ಹಿನ್ನಲೆಯಲ್ಲಿ ಜನಪ್ರತಿನಿಗಳ, ಅಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು. ಖಾಲಿ ಕೊಡಗಳನ್ನು ಹಿಡಿದು, ಮಾನವ ಸರಪಳಿ ನಿಮಿರ್ಸಿ ರಸ್ತೆ ಬಂದ್​ ಮಾಡಿ ಹಲಗೆ ಬಾರಿಸುವ ಮೂಲಕ ಬಾಯಿ ಬಾಯಿ ಬಡೆದುಕೊಂಡ ಮಹಿಳೆಯರು ಪ್ರತಿಭಟನೆ ಮಾಡಿದರು. ಖಾಲಿ ಕೊಡಗಳನ್ನು ಹಿಡಿದು ನಗರಸಭೆ ಅಕಾರಿಗಳು, ಸದಸ್ಯರ ವಿರುದ್ಧ ಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಿಯ ಜನಪ್ರತಿನಿಗಳು, ಅಕಾರಿಗಳು ವಾರ್ಡ್​ ಕಡೆ ತಿರುಗಿ ನೋಡುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಳೆದ 15 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಶ್ರೀದಲ್ಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಗರಸಭೆ ಎದುರು ಉಗ್ರ ಹೋರಾಟ ಮಾಡುವುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದರು. ಈ ವೇಳೆ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

    ಪ್ರತಿ ವರ್ಷ ಬೇಸುಗೆ ಆರಂಭವಾದರೆ ಸಾಕು ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಆದರೆ ಜನ ಪ್ರತಿನಿಗಳು ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಲರಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ನಮ್ಮ ವಾರ್ಡ್​ಗೆ ಬರುತ್ತಾರೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

    ವಾಹನ ಸವಾರರ ಪರದಾಟ:
    ಇಲ್ಲಿನ ಸಿದ್ಧಾರ್ಥ ನಗರದ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಏಕಾಏಕಿ ರಸ್ತೆ ಬಂದ್​ ಮಾಡಿದ ಹಿನ್ನಲೆಯಲ್ಲಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಬಂದ್​ ಮಾಡಿದ ಹಿನ್ನಲೆಯಲ್ಲಿ ವಿವಿಧ ಕಡೆ ಹೋಗಲು ವಾಹನ ಸವಾರರು ಅನ್ಯ ಮಾರ್ಗದಿಂದ ತಮ್ಮ ಸಂಚಾರ ಮಾಡಿದರು. ದೊಡ್ಡ ವಾಹನದವರು ಪ್ರತಿಭಟನೆ ಮುಗಿಯುವರಿಗೂ ಅಲ್ಲಿ ಕಾದರು. ಪ್ರತಿಭಟನೆ ಮುಗಿದ ನಂತರ ಎಂದಿನಂತೆ ವಾಹನಗಳು ಆರಂಭವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts