More

    ಆತ್ಮಸಾಕ್ಷಿಯನ್ನು ಬದಿಗಿಟ್ಟು ಬದುಕಹೊರಟಿದ್ದರ ಫಲವಿದು…

    ಆ ಬುದ್ಧಿವಂತ ರಾವಣನಿಗೆ ಯಾರ್ಯಾರೆಲ್ಲ ತಿಳಿಹೇಳಲಿಲ್ಲ!
    ಆತ್ಮಸಾಕ್ಷಿಯನ್ನು ಬದಿಗಿಟ್ಟು ಬದುಕಹೊರಟಿದ್ದರ ಫಲವಿದು...ಹೆಂಡತಿ ಮಂಡೋದರಿ ತುಂಬಿದ ಅರಿವು ಸಾಮಾನ್ಯವಾದದ್ದೇ… “ತಪು$್ಪ ದಾರಿಯಲ್ಲಿ ಹೋಗುತ್ತಿದ್ದೀರಿ. ಮತ್ತೊಬ್ಬ ಹೆಣ್ಣನ್ನು ಕೆಟ್ಟದೃಷ್ಟಿಯಿಂದ ನೋಡಿದರೂ ಪಾಪದ ಕೂಪಕ್ಕೆ ಬೀಳುತ್ತೀರಿ, ಈ ದಾರಿ ಸರಿಯಲ್ಲ, ನಿಮಗ್ಯಾಕೆ ಇಂಥ ದುರ್ಬುದ್ಧಿ, ಎಡವಬೇಡಿ’ ಅಂತ ಪರಿಪರಿಯಾಗಿ ಹೇಳಿದಳು. ಮರ್ಯಾದಾ ಪುರುಷೋತ್ತಮ ಶ್ರೀರಾಮನೊಂದಿಗೆ ಯುದ್ಧಕ್ಕೆ ಹೋಗುವಾಗಲೂ ಸಹೋದರ ವಿಭೀಷಣ ರಾವಣನನ್ನು ತಡೆದು ಬುದ್ಧಿಮಾತುಗಳನ್ನು ಹೇಳಿದ. ಮೊದಲು ಅಹಂಕಾರದಿಂದ ಮೆರೆದಿದ್ದ ರಾವಣನ ಮಗ ಇಂದ್ರಜಿತನು ಕೂಡ “ಶ್ರೀರಾಮ ಮಹಾಪರಾಕ್ರಮಿ, ಯುದ್ಧವನ್ನು ನಿಲ್ಲಿಸಿಬಿಡು…’ ಎಂದು ನಿವೇದಿಸಿದ. ಊಹೂಂ, ಯಾವ ಮಾತುಗಳೂ ರಾವಣನಿಗೆ ತಟ್ಟಲಿಲ್ಲ. ಏಕೆಂದರೆ, ಕ್ಷಣ&ಕ್ಷಣಕ್ಕೂ ಅವನು ತಾನು ಮಾಡಿದ ಕೃತ್ಯಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಮತ್ತು ಅದೇ ಸರಿಯೆಂದು ಅವನ ಮನಸ್ಸನ್ನು ನಂಬಿಸಿಬಿಟ್ಟಿದ್ದ. ಮಹಾಪರಾಕ್ರಮಿಯಾದ ತನ್ನ ಮುಂದೆ ಶ್ರೀರಾಮ ಸೋಲೊಪ್ಪಲೇಬೇಕು ಅಂತ ಅಬ್ಬರಿಸುತ್ತಿದ್ದ. ಕೊನೆಗೆ ಏನಾಯಿತು ಗೊತ್ತೇ ಇದೆ. ಆದರೆ, ರಾವಣ ಒಮ್ಮೆ ಆತ್ಮಸಾಯ ಮಾತಿಗೆ ಕಿವಿಯಾಗಿದ್ದರೆ… ಅಜ್ಞಾನದ ಅಂಧಕಾರ ಕಳೆದುಬಿಡುತ್ತಿತ್ತು.

    ಶ್ರೀಕೃಷ್ಣ ಪರಮಾತ್ಮನ ಶಕ್ತಿ ಅರಿಯದ ಕಂಸ ಹೂಡಿದ ಕುತಂತ್ರಗಳೆಷ್ಟು? ಶ್ರೀಕೃಷ್ಣ ಬರೀ ಗೋವು ಕಾಯುವ ಬಾಲಕನಲ್ಲ; ಆತ ಇಡೀ ಜಗತ್ತನ್ನು ಪೊರೆಯುವ ಪರಮಶಕ್ತಿ, ಆತನೇ ಭಗವಂತ ಎಂಬ ಪರಮಸತ್ಯ ಇಡೀ ಜಗತ್ತಿಗೆ ಗೊತ್ತಿತ್ತು, ಕಂಸನಿಗೊಬ್ಬನಿಗೆ ಬಿಟ್ಟು! ಕಂಸ ಒಂದು ಕ್ಷಣ ಅಂತಮುರ್ಖಿಯಾಗಿ ಯೋಚಿಸಿದ್ದರೆ, “ನೀನು ತಪು$್ಪ, ಕೃಷ್ಣನದು ಧರ್ಮದ ದಾರಿ’ ಎಂದು ಅಂತ@ಸತ್ವ ಎಚ್ಚರಿಸುತ್ತಿತ್ತು. ಆದರೆ, ಒಳಗಡೆ ಇಣುಕಿ ನೋಡುವ ಧೈರ್ಯ ಆತನಿಗಿರಲಿಲ್ಲ.

    ಯುದ್ಧದಲ್ಲಿ ಗೆಲುವಿಗೆ ತಹತಹಿಸುತ್ತಿದ್ದ ಸಾಮ್ರಾಟ ಅಶೋಕನಿಗೆ ಬಯಸಿದ ಗೆಲುವೇನೋ ಸಿಕ್ಕಿತು. ಆದರೆ, ಯುದ್ಧದ ಸಾವು&ನೋವು, ದು@ಖವನ್ನೆಲ್ಲ ಕಂಡು ಅವನ ಆಂತರ್ಯದ ಪ್ರಜ್ಞೆ ಜಾಗೃತಗೊಂಡಿತು. ಪರಿಣಾಮ, “ಜೀವನದಲ್ಲಿ ಮುಂದೆಂದೂ ಯುದ್ಧವನ್ನೇ ಮಾಡುವುದಿಲ್ಲ’ ಎಂದು ಶಪಥ ಮಾಡಿದನಲ್ಲ; ಅಂಥ ದ್ದೊಂದು ಬೆಳಕಿನಂಥ ಚಿಂತನೆ ಅವನಲ್ಲಿ ಮೂಡಿದ್ದು ಆತ್ಮಸಾಗೆ ಶರಣಾದಾಗಲೇ.
    ಹೌದು, ಭಾರತೀಯ ಜೀವನಧರ್ಮ, ಜೀವನಸಂಸತಿ ಶ್ರೇಷ್ಠವಾದ ಮೌಲ್ಯ, ಆದರ್ಶಗಳನ್ನು ಒಳಗೊಂಡ ಶ್ರೇಷ್ಠಪಥ. ಒಳಿತು&ಕೆಡುಕಿನ ಅಂತರವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟು, ಗೊಂದಲಗಳಿಗೆ ಆಸ್ಪದವೇ ಇಲ್ಲದಂತೆ ರೂಪುಗೊಂಡ ಬದುಕಿನ ಶ್ರೇಷ್ಠ ಮಾದರಿ ಇಲ್ಲಿಯದು. ಹಾಗಾಗಿಯೇ, ಅದರ ಮಹತ್ವವು ಸ್ವಾರ್ಥ, ದುರಾಸೆ, ಭಯ, ದ್ವೇಷದ ಛಾಯೆಯಲ್ಲಿ ಮಸುಕಾಗಬಾರದು ಎಂಬ ಕಾರಣಕ್ಕಾಗಿಯೇ ಸಾಧು&ಸಂತರು, ದಾರ್ಶನಿಕರು, ಆತ್ಮಸಾಾತ್ಕಾರ ಪಡೆದುಕೊಂಡ ಪೂಜ್ಯರು ಜೀವನದ ವ್ಯಾಖ್ಯೆಯನ್ನು ಮತ್ತೆ ಮತ್ತೆ ತಿಳಿಸಿಕೊಡುತ್ತ ಬಂದಿದ್ದಾರೆ. ಅವು ಬರೀ ಬೋಧನೆಗಳಲ್ಲ. ಸದಾ ಕಾಲವೂ ಮನುಷ್ಯ ನಡೆಯಬೇಕಾದ ಮೌಲ್ಯಗಳ ಪಯಣ. ಈ ಪಯಣದಲ್ಲಿ ಸಂತೃಪ್ತಿ, ಸಾರ್ಥಕತೆ ಇದೆ, ಅಂತಿಮ ಗುರಿಯನ್ನು ತಲುಪುವ ಶಕ್ತಿ ಇದೆ ಎಂದೆಲ್ಲ ತಿಳಿಸಿಕೊಟ್ಟರೂ, ಅರೆನಂಬಿಕೆ ಮನುಷ್ಯನನ್ನು ಅಲುಗಾಡಿಸಿ ಬಿಡುತ್ತದೆ.

    ದೇವರು ನಮ್ಮ ಅಂತ@ಸತ್ವವನ್ನು ಪರೀಸಲು ಕೆಲವೊಮ್ಮೆ ಕಠಿಣವಾದ ಪರೀೆಯನ್ನು ಒಡ್ಡುತ್ತಾನೆ ಎಂಬುದೇನೋ ನಿಜ. ಆದರೆ, ಆ ಪರೀೆಯಲ್ಲಿ ಎಂದಿಗೂ ಪರಾಭವಗೊಳ್ಳಲು ಬಿಡುವುದಿಲ್ಲ. ಹಾಂ, ಈ ಪರೀೆಯಲ್ಲಿ ಗೆಲ್ಲಲು ಅಡ್ಡಮಾರ್ಗ ಹಿಡಿದರೆ ಆಗ ಸೋಲು ಅನಿವಾರ್ಯ. “ಮನುಷ್ಯ ಬೇರಾವ ನ್ಯಾಯಾಲಯಕ್ಕೂ ಹೋಗುವ ಅಗತ್ಯವಿಲ್ಲ. ಆತ್ಮಸಾಯ ಕಟಕಟೆಯಲ್ಲಿ ನಿಂತು ಪ್ರಶ್ನಿಸಿಕೊಂಡರೆ ನ್ಯಾಯ&ಅನ್ಯಾಯ, ಸತ್ಯ&ಅಸತ್ಯ, ನೀತಿ&ಅನೀತಿ, ಧರ್ಮ&ಅಧರ್ಮಗಳ ಸ್ಪಷ್ಟ ಚಿತ್ರಣ ಸಿಗುತ್ತದೆ’ ಎಂಬ ಅನುಭಾವಿಗಳ ಮಾತು ತುಂಬ ಸತ್ವವುಳ್ಳದ್ದು. “ಜಗತ್ತನ್ನು ಸುಲಭವಾಗಿ ವಂಚಿಸಬಹುದು; ಆದರೆ ನಮ್ಮನ್ನು ನಾವು ವಂಚಿಸಿಕೊಂಡರೆ… ಎದ್ದು ನಿಲ್ಲುವುದು ಹೇಗೆ?’ “ಆತ್ಮಸಾ ಕೊಂದುಹಾಕಿದ ಬಳಿಕ ಎಷ್ಟು ಪಶ್ಚಾತ್ತಾಪ ಪಟ್ಟರೇನು?’ ಎಂಬ ಅನಾಮಿಕ ದಾರ್ಶನಿಕರ ನುಡಿಗಳು ಅಂತರಂಗದ ಕೊಳೆ ತೊಳೆಯುವಂಥವು.

    “ಹೃದಯದ ಮಾತನ್ನು ಕೇಳಬೇಕು’ ಎಂಬ ಆಪ್ತಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಹೃದಯದ ಮಾತು… ಅದು ಶುಷ್ಕ ಪದವಲ್ಲ, ಭಾವನೆಗಳ ಭಾರವಲ್ಲ; ಅದು ಶುದ್ಧ ಅಂತ@ಕರಣದ ದ್ಯೋತಕ. ಮನಸ್ಸು ಎಷ್ಟೋ ಸಾರಿ ಗೊಂದಲಕ್ಕೆ ಸಿಲುಕುತ್ತದೆ. ಬುದ್ಧಿಭಾವದ ಸಂರ್ಷದಲ್ಲಿ ವಿವೇಚನೆಯ ಹೆಜ್ಜೆ ಇಡುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಆಗ ನೆರವಾಗೋದೇ ಈ ಹೃದಯದ ಮಾತು. ಅದಕ್ಕೆ ಕಿವಿಯಾದರೆ ಅಲ್ಲಿ ಕಲ್ಮಶ ಇರುವುದಿಲ್ಲ, ಸಮರ್ಥನೆಯ ಭರಾಟೆ ಕಾಣುವುದಿಲ್ಲ. ಅಹಂನ ತಾಕಲಾಟ ಇರುವುದಿಲ್ಲ. ಅದು ತಪು$್ಪಗಳನ್ನು ಅವಲೋಕಿಸುವಂತೆ; ಪ್ರಮಾದಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಮುಂದಿನ ಹಂತದಲ್ಲಿ ಭಾವಶುದ್ಧಿಯಾಗಿ ಸಾಗಬೇಕಾದ ದಾರಿಯನ್ನು ದರ್ಶಿಸುತ್ತದೆ. ಆಗ ಗೊಂದಲಗಳೆಲ್ಲವೂ ಮಾಯವಾಗಿ, ಮನಸ್ಸು ಮೋಡದಿಂದ ಮುಕ್ತಗೊಂಡ ಶುಭ್ರಾಕಾಶದಂತೆ ಸ್ಪಷ್ಟವಾಗುತ್ತದೆ.
    ಅದಕ್ಕಾಗಿಯೇ ನಮ್ಮಲ್ಲಿ ಆತ್ಮಾವಲೋಕನಕ್ಕೆ ಹೆಚ್ಚು ಪ್ರಾಮುಖ್ಯ. ವಚನಗಳು, ಅಭಂಗಗಳು, ದಾಸಸಾಹಿತ್ಯದ ವಿವಿಧ ಪ್ರಕಾರಗಳು ಈ ಆತ್ಮಾವಲೋಕನದ ಮಾರ್ಗವನ್ನು ಪ್ರಶಸ್ತಗೊಳಿಸುತ್ತ ಬಂದಿವೆ. ಆತ್ಮಾವಲೋಕನ ಮತ್ತು ಅದರಿಂದ ಹೊಮ್ಮುವ ಲಿತಾಂಶದ ಮುಂದೆ ಯಾವ ಕೃತಕತೆಗಳೂ ನಿಲ್ಲಲು ಸಾಧ್ಯವಿಲ್ಲ. ಸಮಸ್ಯೆ ಶುರುವಾಗುವುದು ಎಲ್ಲಿ ಎಂದರೆ ನಮ್ಮ ಅಂತ@ಕರಣ ಅದರ ಸೌಂದರ್ಯವನ್ನು ಕಳೆದುಕೊಂಡು, ಅಪಸವ್ಯಗಳನ್ನು ಒಳಗೆ ಬಿಟ್ಟುಕೊಟ್ಟಾಗ. ಈ ಪರಿವರ್ತನೆಗೆ ತಗುಲುವ ಸಮಯ ಅಲ್ಪವಾದರೂ; ಅದರಿಂದ ಆಗುವ ಪರಿಣಾಮ ಮಾತ್ರ ಘೋರ. ಅಂತ@ಕರಣದ ಲೋಕದಲ್ಲೇ ಅಲ್ಲೋಲಕಲ್ಲೋಲವಾದರೆ ವ್ಯಕ್ತಿತ್ವ ಹೇಗೆ ಗಟ್ಟಿಯಾಗಿ ನಿಲ್ಲಬಲ್ಲದು. ಕೆಲವೊಮ್ಮೆ ದಾರುಣ ಸೋಲು ಅಥವಾ ಪತನ ಎದುರಾಗುವುದು ಇಂಥ ಸಂದರ್ಭದಲ್ಲೇ.

    ವಿಪರ್ಯಾಸ ಎಂದರೆ ಈ ಆತ್ಮಸಾ, ಆತ್ಮಾವಲೋಕನ, ಆಂತರ್ಯದ ಪ್ರಜ್ಞೆ, ಅಂತ@ಕರಣದ ಸೌಂದರ್ಯ ಇದೆಲ್ಲವೂ ಕಳೆದುಹೋಗುತ್ತಿರುವುದರಿಂದಲೇ ಮನುಷ್ಯನಿಗೆ ತನ್ನ ತಪು$್ಪಗಳು ತಪು$್ಪಗಳೆನಿಸುತ್ತಿಲ್ಲ. ಬದಲಾಗಿ, ಅದಕ್ಕೆ ಸಮರ್ಥನೆಯ ಪೊರೆ ಬೇರೆ! ಎಲ್ಲೆಲ್ಲೂ ಭೌತಿಕ ಅಭಿವೃದ್ಧಿಯ ಬಗ್ಗೆ ಚರ್ಚೆ ಗಳಾಗುತ್ತಿವೆಯೇ ಹೊರತು; ಮನುಷ್ಯ ಕಳೆದುಕೊಂಡ ಮೌಲ್ಯಗಳತ್ತ ಮತ್ತೆ ಸಾಗುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ವಿರಳ. ಹಾಗೆಂದಾಕ್ಷಣ, ಕೆಲವರು ಅದನ್ನು “ಅಧ್ಯಾತ್ಮ’ ಎಂದು ವರ್ಗೀಕರಿಸಿ ದೂರ ಇಡುತ್ತಾರೆ. ಮತ್ತೆ ಕೆಲವರು ತತ್ತ$$$್ವಶಾಸ್ತ್ರದಿಂದ ಆಗಬೇಕಾದ್ದು ಏನು ಎಂದು ಪ್ರಶ್ನಿಸುತ್ತಾರೆ. ಇಲ್ಲಿ ಪ್ರಶ್ನೆಯಿರುವುದು ಜ್ಞಾನಗಳ ಶಾಖೆಗಳ ಬಗ್ಗೆಯಲ್ಲ. ಮನುಷ್ಯ ತಾನು ಕ್ರಮಿಸಬೇಕಾದ ಮೌಲ್ಯಗಳ ಹಾದಿಯನ್ನೇ ಮರೆತಿರುವ ಬಗ್ಗೆ.

    ಅಂತರಂಗದ ಲೋಕದಲ್ಲಿ ನಮ್ಮನ್ನೇ ಪ್ರತಿಷ್ಠಾಪಿಸಿ ಕೊಂಡು ನೋಡಬೇಕಾದರೆ ಮೊದಲಿಗೆ ಎರಡು ಗುಣಗಳು ಬೇಕು ಎಂದಿರುವ ಸಂತ ತುಕಾರಾಮರು, ತ್ಯಾಗ ಮತ್ತು ಸಂತೋಷವೇ ಆ ಎರಡು ಆದ್ಯತೆಗಳು ಎಂದಿದ್ದಾರೆ. ತ್ಯಾಗ ಮಾಡಲು ಕಲಿತರೆ ಅದರ ಹಿಂದೆಯೇ ಸಂತೋಷದ ಆಗಮನವಾಗುತ್ತದೆ. ಮನಸ್ಸು ಸಂತೃಪ್ತಿಯಿಂದ ಕೂಡಿ ಇರಲು ಇನ್ನೇನು ಬೇಕು? “ಜೀವನ ತುಂಬ ಚಿಕ್ಕದು. ಹಾಗಾಗಿ ಬೆಳಗ್ಗೆ ಕೊರಗು, ವಿಷಾದದ ಭಾವದಿಂದೇಕೆ ಏಳುತ್ತೀರಿ? ನಿಮ್ಮನ್ನು ಪ್ರೀತಿಸುವವರನ್ನು ನೀವೂ ಪ್ರೀತಿಸಿ, ರ್ನಿಲಸುವವರನ್ನು ರ್ನಿಲಸಿ ಬಿಡಿ. ಆಗಿರುವುದೆಲ್ಲ ಯಾವುದೋ ಒಂದು ರ್ನಿದಿಷ್ಟ ಕಾರಣಕ್ಕೆ ಆಗಿದೆ ಎಂದುಕೊಳ್ಳಿ’ ಅಂದಿದ್ದಾನೆ ಅನಾಮಿಕ ಕವಿಯೊಬ್ಬ. ಆದರೂ, ಕೊರಗು ಕಾಡುತ್ತಲೇ ಇರುತ್ತದೆ. ಏಕೆಂದರೆ, ಆತ್ಮನಿರೀಕ್ಷಣೆಗೆ ನಾವು ಬಹುತೇಕರು ಒಪು$್ಪವುದಿಲ್ಲ. ಸಾಮಾಜಿಕ ವಿಜ್ಞಾನಿಯೊಬ್ಬ ಇದಕ್ಕೆ ಕಾರಣಗಳನ್ನೂ ಪಟ್ಟಿ ಮಾಡಿದ್ದಾನೆ.

    # ನಾವು ತಪು$್ಪ ಮಾಡಿದ್ದೇವೆ ಎಂದು ಆಂತರ್ಯಕ್ಕೆ ಗೊತ್ತಿದ್ದರೂ, “ನಾನೇ ಸರಿ’ ಎಂದು ಮನಸ್ಸಿಗೆ ನಂಬಿಸಿರುತ್ತೇವೆ.
    # ಸೋಲೊಪ್ಪಿಕೊಳ್ಳುವುದು, ಪಶ್ಚಾತಾಪ ಪಡುವುದು ಅವಮಾನಕ್ಕಿಂತ ಘೋರ ಎಂಬ ಭ್ರಮೆ.
    # ಬೇರೆಯವರ ತಪ್ಪಿಗಾಗಿ ಅವರನ್ನು ಕ್ಷಮಿಸಲು ಮನಸ್ಸು ಒಪ್ಪದೇ ಇರುವುದು. ಈರ್ಷೆ, ಪ್ರತಿಕಾರದ ದಾಹವನ್ನು ಸದಾ ಜಾಗೃತವಾಗಿಟ್ಟುಕೊಳ್ಳುವುದು.
    # ಸ್ವತ@ ನಮ್ಮನ್ನೂ ನಾವು ಕ್ಷಮಿಸುವುದು ಕಲಿಯಬೇಕು. ಇದು ಸಾಧ್ಯವಾಗದಿದ್ದಾಗ ಮನಸ್ಸು ಆತ್ಮನಿರೀಕ್ಷಣೆಯತ್ತ ಹೊರಳುವುದಿಲ್ಲ.

    ಎಷ್ಟು ನಿಜ ಅಲ್ಲವೇ? ಅದಕ್ಕೇ ಭ್ರಷ್ಟರು ತಾವು “ಪ್ರಾಮಾಣಿಕರು’ ಎಂದು ಮೊಂಡುವಾದ ಮಾಡುತ್ತಾರೆ. ಅನ್ಯಾಯ ಎಸಗಿದವರು ತಾವು “ಸಂಭಾವಿತರು’ ಎಂದು ಬಿಂಬಿಸಿಕೊಳ್ಳಲು ಹರಸಾಹಸ ಮಾಡುತ್ತಾರೆ. ಅನೀತಿಯಲ್ಲಿ ತೊಡಗಿದವರು ತಮ್ಮದು “ಸರಿಯಾದ ದಾರಿ’ ಎಂದು ನಂಬಿಸುತ್ತಾರೆ. ಹಾಗಾಗಿಯೇ, ಮೋಸ, ಅನ್ಯಾಯ, ವಂಚನೆ, ಭ್ರಷ್ಟಾಚಾರಗಳು ಭಿಡೆ ಇಲ್ಲದೆ ಬೆಳೆಯುತ್ತಿರುವುದು. ಆದರೆ, ಎಷ್ಟು ದಿನ…? ಎಲ್ಲರನ್ನೂ ಯಾಮಾರಿಸಬಹುದು, ಸಾಕ್ಷ$್ಯಗಳು ಇಲ್ಲದೆ ನ್ಯಾಯಾಲಯದಲ್ಲೂ ಗೆದ್ದು ಬಿಡಬಹುದು. ಕೊನೆಗೊಂದು ದಿನ ನಾವು ನಮ್ಮದೇ ಆತ್ಮಸಾಯ ಕಟಕಟೆಗೆ ಬಂದು ನಿಲ್ಲಬೇಕಲ್ಲವೇ? ಆಗ ಯಾರನ್ನೂ ದೂಷಿಸುವಂತಿಲ್ಲ. ಅದನ್ನೇ “ಕರ್ಮ’ ಎಂದು ಸಂಬೋಧಿಸಿದೆ ನಮ್ಮ ಅಧ್ಯಾತ್ಮ. ಕರ್ಮಶುದ್ಧಿ, ಭಾವಶುದ್ಧಿ, ಚಿತ್ತಶುದ್ಧಿಗಳ ಮುಖೇನವೇ ಆತ್ಮಸಾಯ ನ್ಯಾಯಾಲಯದಲ್ಲಿ ಗೆಲ್ಲಬಹುದೆ ಹೊರತು ನೂರೆಂಟು ನೆಪಗಳ ತರ್ಕದಿಂದಲ್ಲ. ಇಂಥ ಚಿಂತನೆ ಎದೆಯಂಗಳದಲ್ಲಿ ಜಾಗೃತವಾದರೆ ಮನಸ್ಸು ಕೆಡುಕಿನೆಡೆ ಸಾಗುವುದಿಲ್ಲ. “ಇದು ತಪು$್ಪ, ಇದು ಸರಿ’ ಎಂದು ಅಂತರಂಗವೇ ಸರಿಯಾಗಿ ನಿರ್ದೇಶಿಸುತ್ತದೆ. ಮಾನವ ಮಾಧವನ ಎತ್ತರಕ್ಕೆ ಸಾಗಬೇಕಾದ ಪರಿಯೂ ಇದುವೇ. ಮನುಷ್ಯಧರ್ಮ, ಜೀವನಧರ್ಮದ ಉತ್ಕರ್ಷವೂ ಇದರಿಂದಲೇ ಎಂದು ತಿಳಿಸಿಕೊಟ್ಟ ಆ ಸಂತಸಮಾಜದ ಬೌದ್ಧಿಕ, ಭಾವಲೋಕದ ಸತ್ಯ ನಮ್ಮ ಅಂತರಂಗದ ಕಣ್ಣನ್ನು ತೆರೆಸಲಿ, ಒಳಿತಿನತ್ತಲೇ ನಮ್ಮನ್ನು ಕರೆದೊಯ್ಯಲಿ.

    (ಲೇಖಕರು “ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts