ಜನಪ್ರಿಯ ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಆರೋಗ್ಯದ ಕುರಿತ ತಪ್ಪು ಮಾಹಿತಿಗಳನ್ನು ಪ್ರಕಟಿಸದಂತೆ ಹಲವಾರು ಯೂಟ್ಯೂಬ್ ಚಾನಲ್ಗಳ ಮೇಲೆ ದೆಹಲಿ ಹೈಕೋರ್ಟ್ ರ್ನಿಬಂಧ ವಿಧಿಸಿ ಆದೇಶ ನೀಡಿರುವುದು ಹಾಗೂ ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು ಅಸ್ವಸ್ಥ ವಿಕೃತತೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವುದು ಸಾಮಾಜಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಆರಾಧ್ಯ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜನಪ್ರಿಯ ನಟಿ ಜಯಾ ಬಚ್ಚನ್ ಅವರ ಮೊಮ್ಮಗಳು ಕೂಡ. ಹೀಗಾಗಿ, ಇಡೀ ಕುಟುಂಬ ಸೆಲೆಬ್ರಿಟಿಗಳಿಂದ ತುಂಬಿದೆ. ಸೆಲೆಬ್ರಿಟಿಗಳ ಬಗೆಗೆ ಬರೆಯುವ ಮೂಲಕ ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಯೂಟ್ಯೂಬ್ ಚಾನಲ್ಗಳು ಜನಪ್ರಿಯತೆ ಹಾಗೂ ವೀಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗುವುದು ರೂಢಿಯಾಗಿದೆ. ಈ ಸಂದರ್ಭದಲ್ಲಿ ವಿಷಯದ ನೈಜತೆ ಬಗೆಗೆ ಗಮನ ನೀಡುವುದು ಕಡಿಮೆಯಾಗಿ ಗಾಳಿಸುದ್ದಿ, ವದಂತಿಗಳನ್ನೇ ಆಧರಿಸಿ ಬರೆಯುವುದು, ವಿಡಿಯೋ& ೋಟೋಗಳನ್ನು ಹರಿಯಬಿಡುವುದು ಕಂಡುಬರುತ್ತಿದೆ. 11 ವರ್ಷದ ಬಾಲಕಿ ಆರಾಧ್ಯ ಅಸ್ವಸ್ಥರಾಗಿದ್ದಾರೆ ಎಂದು ಕೆಲವು ಯೂಟ್ಯೂಬ್ ಚಾನಲ್ಗಳು ಸುಳ್ಳು ಸುದ್ದಿ ಹರಡಿದರೆ, ಇನ್ನು ಕೆಲವು ಇನ್ನಷ್ಟು ಮುಂದೆ ಹೋಗಿ ಅವರು ಸಾವನ್ನಪ್ಪಿದ್ದಾರೆ ಎಂದೂ ಹೇಳಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಈ ಸುಳ್ಳು ಸುದ್ದಿಯನ್ನು ಚಾನಲ್ಗಳಿಂದ ತೆಗೆದುಹಾಕಲು, ರ್ನಿಬಂಧಿಸಲು ಆರಾಧ್ಯ ತಂದೆ ಅಭಿಷೇಕ್ ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.
ಆರಾಧ್ಯ ಬಚ್ಚನ್ ಆರೋಗ್ಯ ಕುರಿತ ವೀಡಿಯೊಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುವಂತೆ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಗೂಗಲ್ಗೆ ಸೂಚಿಸಿದೆ. ಗೂಗಲ್ನ ಗಮನಕ್ಕೆ ತಂದಾಗಲೆಲ್ಲಾ ಇಂತಹ ವೀಡಿಯೊಗಳನ್ನು ತೆಗೆದುಹಾಕಬೇಕು ಎಂದೂ ಆದೇಶಿಸಿದೆ. ಆದರೆ, ಭಾರತದಲ್ಲಿ ನೂರಾರು ಭಾಷೆಗಳಲ್ಲಿ ಲಾಂತರ ಸಂಖ್ಯೆಯಲ್ಲಿ ಯೂಟ್ಯೂಬ್ ಚಾನಲ್ಗಳಿವೆ. ಏಕೆಂದರೆ, ಯೂಟ್ಯೂಬ್ ಚಾಲನ್ ಆರಂಭಿಸುವುದು ತೀರ ಸುಲಭ. ವಯಸ್ಕರಾದವರು ಯಾರಾದರೂ ಆರಂಭಿಸಬಹುದು. ದೊಡ್ಡ ವೆಚ್ಚವೇನಿಲ್ಲ. ಯೂಟ್ಯೂಬ್ಗೆ ಹೋಗಿ ಲಾಗಿನ್ ಅಗಿ ಣ ಮಾತ್ರದಲ್ಲಿಯೇ ಶುರು ಮಾಡಬಹುದು. ಎಷ್ಟು ಜನ, ಎಷ್ಟು ಅವಧಿ ವೀಣೆ ಮಾಡುತ್ತಾರೆ ಎಂಬುದನ್ನು ಆಧರಿಸಿ ಚಾನಲ್ಗಳಿಗೆ ಹಣ ಪಾವತಿ ಮಾಡಲಾಗುತ್ತದೆ. ಹೀಗಾಗಿ, ವೀಕರನ್ನು ಸೆಳೆಯಲು ಕೆಲ ಯೂಟ್ಯೂಬ್ ಚಾನಲ್ನವರು ಮನತೋಚಿದಂತೆ ವಿಷಯಗಳನ್ನು ತುಂಬುತ್ತಾರೆ; ವದಂತಿ, ಗಾಳಿಸುದ್ದಿಗಳನ್ನು ಹರಡುತ್ತಾರೆ ಎಂಬ ದಟ್ಟ ಆರೋಪವಿದೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಆಕ್ಷೇಪಾರ್ಹವಾದ, ಅನಗತ್ಯವಾದ ಸಂದೇಶ, ಅಭಿಪ್ರಾಯಗಳನ್ನು ಹಾಕುವುದಕ್ಕೆ, ಹಂಚಿಕೊಳ್ಳುವುದಕ್ಕೆ ಸ್ಪಷ್ಟ ರ್ನಿಬಂಧವನ್ನು ಈ ಕಾಯ್ದೆ ಹೇರುತ್ತದೆ. ಕಾನೂನುಬಾಹಿರ, ಹಾದಿ ತಪ್ಪಿಸುವ, ಗಲಭೆಗೆ ಪ್ರಚೋದಿಸುವ ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮಾವಳಿಗಳನ್ನು ಕೂಡ ರೂಪಿಸಲಾಗಿದೆ. ಈ ತಾಣಗಳಲ್ಲಿ ಪ್ರಕಟವಾಗುವ ಮಾಹಿತಿ ಆಧರಿಸಿ ಮಾನನಷ್ಟ ಮೊಕದ್ದಮೆಯನ್ನು ಬಾಧಿತರಾದವರು ಹೂಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ ಎಲ್ಲ ಚಾನಲ್ಗಳ ಮೇಲೆ ಕಣ್ಗಾವಲು ವ್ಯವಸ್ಥೆ ರೂಪಿಸುವುದು ಸವಾಲಿನ ಸಂಗತಿಯಾಗಿದೆ.