More

    ಸಂಪಾದಕೀಯ | ವಿಶ್ವಾಸಾರ್ಹತೆ ಕೊರತೆ

    ಜನಪ್ರಿಯ ಬಾಲಿವುಡ್​ ನಟರಾದ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಆರೋಗ್ಯದ ಕುರಿತ ತಪ್ಪು ಮಾಹಿತಿಗಳನ್ನು ಪ್ರಕಟಿಸದಂತೆ ಹಲವಾರು ಯೂಟ್ಯೂಬ್​ ಚಾನಲ್​ಗಳ ಮೇಲೆ ದೆಹಲಿ ಹೈಕೋರ್ಟ್​ ರ್ನಿಬಂಧ ವಿಧಿಸಿ ಆದೇಶ ನೀಡಿರುವುದು ಹಾಗೂ ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು ಅಸ್ವಸ್ಥ ವಿಕೃತತೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವುದು ಸಾಮಾಜಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಆರಾಧ್ಯ ಬಾಲಿವುಡ್​ ಸೂಪರ್​ ಸ್ಟಾರ್​ ಅಮಿತಾಬ್​ ಬಚ್ಚನ್​ ಹಾಗೂ ಜನಪ್ರಿಯ ನಟಿ ಜಯಾ ಬಚ್ಚನ್​ ಅವರ ಮೊಮ್ಮಗಳು ಕೂಡ. ಹೀಗಾಗಿ, ಇಡೀ ಕುಟುಂಬ ಸೆಲೆಬ್ರಿಟಿಗಳಿಂದ ತುಂಬಿದೆ. ಸೆಲೆಬ್ರಿಟಿಗಳ ಬಗೆಗೆ ಬರೆಯುವ ಮೂಲಕ ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಯೂಟ್ಯೂಬ್​ ಚಾನಲ್​ಗಳು ಜನಪ್ರಿಯತೆ ಹಾಗೂ ವೀಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗುವುದು ರೂಢಿಯಾಗಿದೆ. ಈ ಸಂದರ್ಭದಲ್ಲಿ ವಿಷಯದ ನೈಜತೆ ಬಗೆಗೆ ಗಮನ ನೀಡುವುದು ಕಡಿಮೆಯಾಗಿ ಗಾಳಿಸುದ್ದಿ, ವದಂತಿಗಳನ್ನೇ ಆಧರಿಸಿ ಬರೆಯುವುದು, ವಿಡಿಯೋ& ೋಟೋಗಳನ್ನು ಹರಿಯಬಿಡುವುದು ಕಂಡುಬರುತ್ತಿದೆ. 11 ವರ್ಷದ ಬಾಲಕಿ ಆರಾಧ್ಯ ಅಸ್ವಸ್ಥರಾಗಿದ್ದಾರೆ ಎಂದು ಕೆಲವು ಯೂಟ್ಯೂಬ್​ ಚಾನಲ್​ಗಳು ಸುಳ್ಳು ಸುದ್ದಿ ಹರಡಿದರೆ, ಇನ್ನು ಕೆಲವು ಇನ್ನಷ್ಟು ಮುಂದೆ ಹೋಗಿ ಅವರು ಸಾವನ್ನಪ್ಪಿದ್ದಾರೆ ಎಂದೂ ಹೇಳಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಈ ಸುಳ್ಳು ಸುದ್ದಿಯನ್ನು ಚಾನಲ್​ಗಳಿಂದ ತೆಗೆದುಹಾಕಲು, ರ್ನಿಬಂಧಿಸಲು ಆರಾಧ್ಯ ತಂದೆ ಅಭಿಷೇಕ್​ ಕೋರ್ಟ್​ ಮೆಟ್ಟಿಲೇರಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.

    ಆರಾಧ್ಯ ಬಚ್ಚನ್​ ಆರೋಗ್ಯ ಕುರಿತ ವೀಡಿಯೊಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುವಂತೆ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಗೂಗಲ್​ಗೆ ಸೂಚಿಸಿದೆ. ಗೂಗಲ್​ನ ಗಮನಕ್ಕೆ ತಂದಾಗಲೆಲ್ಲಾ ಇಂತಹ ವೀಡಿಯೊಗಳನ್ನು ತೆಗೆದುಹಾಕಬೇಕು ಎಂದೂ ಆದೇಶಿಸಿದೆ. ಆದರೆ, ಭಾರತದಲ್ಲಿ ನೂರಾರು ಭಾಷೆಗಳಲ್ಲಿ ಲಾಂತರ ಸಂಖ್ಯೆಯಲ್ಲಿ ಯೂಟ್ಯೂಬ್​ ಚಾನಲ್​ಗಳಿವೆ. ಏಕೆಂದರೆ, ಯೂಟ್ಯೂಬ್​ ಚಾಲನ್​ ಆರಂಭಿಸುವುದು ತೀರ ಸುಲಭ. ವಯಸ್ಕರಾದವರು ಯಾರಾದರೂ ಆರಂಭಿಸಬಹುದು. ದೊಡ್ಡ ವೆಚ್ಚವೇನಿಲ್ಲ. ಯೂಟ್ಯೂಬ್​ಗೆ ಹೋಗಿ ಲಾಗಿನ್​ ಅಗಿ ಣ ಮಾತ್ರದಲ್ಲಿಯೇ ಶುರು ಮಾಡಬಹುದು. ಎಷ್ಟು ಜನ, ಎಷ್ಟು ಅವಧಿ ವೀಣೆ ಮಾಡುತ್ತಾರೆ ಎಂಬುದನ್ನು ಆಧರಿಸಿ ಚಾನಲ್​ಗಳಿಗೆ ಹಣ ಪಾವತಿ ಮಾಡಲಾಗುತ್ತದೆ. ಹೀಗಾಗಿ, ವೀಕರನ್ನು ಸೆಳೆಯಲು ಕೆಲ ಯೂಟ್ಯೂಬ್​ ಚಾನಲ್​ನವರು ಮನತೋಚಿದಂತೆ ವಿಷಯಗಳನ್ನು ತುಂಬುತ್ತಾರೆ; ವದಂತಿ, ಗಾಳಿಸುದ್ದಿಗಳನ್ನು ಹರಡುತ್ತಾರೆ ಎಂಬ ದಟ್ಟ ಆರೋಪವಿದೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಆಕ್ಷೇಪಾರ್ಹವಾದ, ಅನಗತ್ಯವಾದ ಸಂದೇಶ, ಅಭಿಪ್ರಾಯಗಳನ್ನು ಹಾಕುವುದಕ್ಕೆ, ಹಂಚಿಕೊಳ್ಳುವುದಕ್ಕೆ ಸ್ಪಷ್ಟ ರ್ನಿಬಂಧವನ್ನು ಈ ಕಾಯ್ದೆ ಹೇರುತ್ತದೆ. ಕಾನೂನುಬಾಹಿರ, ಹಾದಿ ತಪ್ಪಿಸುವ, ಗಲಭೆಗೆ ಪ್ರಚೋದಿಸುವ ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮಾವಳಿಗಳನ್ನು ಕೂಡ ರೂಪಿಸಲಾಗಿದೆ. ಈ ತಾಣಗಳಲ್ಲಿ ಪ್ರಕಟವಾಗುವ ಮಾಹಿತಿ ಆಧರಿಸಿ ಮಾನನಷ್ಟ ಮೊಕದ್ದಮೆಯನ್ನು ಬಾಧಿತರಾದವರು ಹೂಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ ಎಲ್ಲ ಚಾನಲ್​ಗಳ ಮೇಲೆ ಕಣ್ಗಾವಲು ವ್ಯವಸ್ಥೆ ರೂಪಿಸುವುದು ಸವಾಲಿನ ಸಂಗತಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts