More

    ಬೃಹತ್ ಮೊತ್ತದತ್ತ ಕರ್ನಾಟಕ

    ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಚಂಡೀಗಢ ವಿರುದ್ಧ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ.
    ಪಂದ್ಯದ 3ನೇ ದಿನವಾದ ಭಾನುವಾರ ಭೋಜನ ವಿರಾಮದ ವೇಳೆಗೆ ಕರ್ನಾಟಕ 93 ಓವರ್ ಗಳಲ್ಲಿ 5 ವಿಕೆಟ್ ಗೆ 385 ರನ್ ಗಳಿಸಿ ಪ್ರಥಮ ಇನ್ನಿಂಗ್ಸ್ ಆಧಾರದಲ್ಲಿ 117 ರನ್ ಗಳ ಮನ್ನಡೆ ಗಳಿಸಿದೆ. ಚಂಡೀಗಢ ಪ್ರಥಮ‌ ಇನ್ನಿಂಗ್ಸ್ 267 ರನ್  ಗಳಿಸಿತ್ತು.
    ಶನಿವಾರ ದಿನದಾಟದ ಅಂತ್ಯಕ್ಕೆ ಕರ್ನಾಟಕ  3 ವಿಕೆಟ್ ಗೆ 268 ರನ್ ಗಳಿಸಿತ್ತು.  ಮನೀಷ್ ಪಾಂಡೆ 148 ರನ್ ಗಳಿಸಿ ಹಾಗೂ ಹಾರ್ದಿಕ್ ರಾಜ 82 ರನ್ ಗಳಿಸಿ ಔಟಾದರು. ಭೋಜನ ವಿರಾಮದ ವೇಳೆಗೆ ವಿಕೆಟ್ ಕೀಪರ್ ಶ್ರೀನಿವಾಸ ಶರತ್ 14 ರನ್ ಗಳಿಸಿ ಹಾಗೂ ವೈಶಾಕ್ ವಿಜಯಕುಮಾರ್ 12 ರನ್ ಗಳಿಸಿ ಆಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts